ಸಂಪತ್ತನ್ನು ನಿರ್ಮಿಸುವುದು, ಒಂದು ಸಮಯದಲ್ಲಿ ಅದೇ ಸಂಬಂಧ.
The cornerstones of our advisory approach. On the right side of law, always - Any time, all the time.
ನಮ್ಮ ಪ್ರತಿಯೊಬ್ಬ ಹೂಡಿಕೆದಾರರ ಆರ್ಥಿಕ ಗುರಿ, ಉದ್ದೇಶಗಳಿಗಾಗಿ ಕ್ರಮವದ ಹೂಡಿಕೆಯ ಮೂಲಕ ಸದೃಢ ಭವಿಷ್ಯವನ್ನು ರೂಪಿಸುವುದು.
ಆತ್ಮೀಯ 2012ರಲ್ಲಿ, ಕೇವಲ 10 ಲಕ್ಷ ರೂಪಾಯಿಯ ಅಸೆಟ್ ಅಂಡರ್ ಅಡ್ವೈಸರಿ (ಎಯುಎಮ್) ನಿಂದ ತನ್ನ ಮಹಾತ್ವಾಕಾಂಕ್ಷಿ ಪಯಣವನ್ನು ಆರಂಭಿಸಿತು. ಹೂಡಿಕೆದಾರರು ಅತ್ಯುತ್ತಮವಾದ ಸೇವೆ ಮತ್ತು ಮಾರ್ಗದರ್ಶನವನ್ನು ನೀಡುವ ನಮ್ಮ ಪ್ರಾಮಾಣಿಕ ಉದ್ದೇಶವು ಹಲವು ಹೃದಯಗಳನ್ನು ತಲುಪಿದೆ. ಒಬ್ಬರಿಂದ ಒಬ್ಬರು ಹಂಚಿಕೊಂಡ ಮಾಹಿತಿಯಿಂದಾಗಿ ನಮ್ಮ ವ್ಯವಹಾರವು ದಿನೆ ದಿನೇ ವಿಸ್ತಾರವಾಗುತ್ತಾ ಹೋಯಿತು. ಹೆಚ್ಚು ಹೆಚ್ಚು ಜನರಿಗೆ ತಮ್ಮ ಹಣಕಾಸಿನ ಸ್ವಾತಂತ್ರ್ಯವನ್ನು ಗಳಿಸಿ ಕೊಡುವಲ್ಲಿ ನಮಗೆ ಅವಕಾಶ ಸಿಕ್ಕಿತು.
ಹೂಡಿಕೆದಾರರನ್ನು ಕೇಂದ್ರ ಬಿಂದುವಾಗಿ ನೋಡುವ ನಮ್ಮ ಕಾರ್ಯವಿಧಾನ ಮತ್ತು ನಮ್ಮ ವೃತ್ತಿಯ ಕುರಿತು ನಮ್ಮ ಬದ್ಧತೆಗಳಿಂದಾಗಿ ನಾವು ಹಲವು ಹೃದಯಗಳನ್ನು ಗೆಲ್ಲಲು ಸಾಧ್ಯವಾಯಿತು ಎಂಬುದೇ ನಮ್ಮ ದೃಢ ನಂಬಿಕೆ. ಶಿವಮೊಗ್ಗ ಪ್ರದೇಶದಲ್ಲಿ ಪ್ರಸ್ತುತ, ಆತ್ಮೀಯವು ಅತ್ಯಂತ ದೊಡ್ಡ ಮ್ಯೂಚುವಲ್ ಫಂಡ್ ವಿತರಕರಾಗಿದ್ದೇವೆ; ಇಡೀ ಜಗತ್ತಿನಾದ್ಯಂತ ನಮ್ಮ ಹೂಡಿಕೆದಾರರಿದ್ದಾರೆ.
ಇಂದಿಗೆ, ನಮ್ಮ ಸಂಸ್ಥೆ 280 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಡಿಕೆದಾರರ ಹಣವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ. ಇದು ನಮ್ಮ ಆನಂದದ ಮತ್ತು ಜವಾಬ್ದಾರಿಯ ಪ್ರತೀಕವೂ ಆಗಿದೆ.
From the humble beginnings of tax consultancy to the towering achievement of becoming the largest mutual funds distributors in Shimoga, our founders’ leadership is rooted in integrity.
ಆತ್ಮೀಯದ ಸಹ-ಸಂಸ್ಥಾಪಕರು ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆದ, ನಾಗೇಂದ್ರ ಎನ್ ಎಂ ಅವರು ಕಳೆದ 35 ವರ್ಷಗಳಿಂದ ತೆರಿಗೆ ಸಲಹೆಗಾರರಾಗಿದ್ದಾರೆ, 12 ವರ್ಷಕ್ಕೂ ಹೆಚ್ಚು ಸಮಯದಿಂದ ಮ್ಯೂಚ್ಯುವಲ್ ಫಂಡ್ ಸಲಹೆಗಾರರಾಗಿದ್ದಾರೆ. ಕಳೆದ ಒಂದು ದಶಕದಿಂದ ಒಬ್ಬ ವಿಶ್ವಸನೀಯ, ವ್ಯಾವಹಾರಿಕ ಹಣಕಾಸು ಸಲಹಕಾರರಾಗಿ ಹೆಸರು ಗಳಿಸಿದ್ದಾರೆ. ಅವರ ಈ ಆಳವಾದ ಪರಿಣತಿ ಮತ್ತು ವ್ಯಾಪಕ ಅನುಭವವು ಅವರ ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಸುವಲ್ಲಿ ಹಾಗೂ ಹಣವನ್ನು ಬೆಳೆಸುವಲ್ಲಿ ನೆರವಾಗಿದ್ದಾರೆ. ಶಿವಮೊಗ್ಗದಲ್ಲಿ ಅತ್ಯಂತ ದೊಡ್ಡ ಮ್ಯೂಚುವಲ್ ಫಂಡ್ ವಿತರಕ ಸಂಸ್ಥೆಯಾದ ಆತ್ಮೀಯದ ಮೂಲಕ ಅವರು 280 ಕೋಟಿ ಮೌಲ್ಯದ ಹೂಡಿಕೆದಾರರ ಹಣವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಮಯ ಸಿಕ್ಕಾಗ ಬೇರೆ ಬೇರೆ ವಿಷಯಗಳ ಕುರಿತು ಆಲೋಚಿಸುತ್ತಾರೆ. ಹಾಗೆ ಸಿನಿಮಾಗಳನ್ನು ವೀಕ್ಷಿಸುವುದರಲ್ಲಿ, ಕವನಗಳನ್ನು ಬರೆಯಲು ಸಂತೋಷ ಪಡುತ್ತಾರೆ.
ಆತ್ಮೀಯದ ಪಾಲುದಾರರು, ವಿಮೆ ಮತ್ತು ಹಣಕಾಸು ಸೇವೆ ಉದ್ಯಮದಲ್ಲಿ 25 ವರ್ಷಗಳ ಅನುಭವವುಳ್ಳ ವಿಮಾ ಸಲಹಗಾರರು. ಆರೋಗ್ಯ ಮತ್ತು ಜೀವ ವಿಮಾ ಕ್ಷೇತ್ರದಲ್ಲಿ ವಿಶೇಷ ಪರಿಣತಿಯುಳ್ಳ ಇವರು, ಹಲವು ಗ್ರಾಹಕರಿಗೆ ತಕ್ಕಂತೆ ವಿಮೆಯನ್ನು ನಿಗಧಿಗೊಳಿಸುವಲ್ಲಿ ನೆರವಾಗಿದ್ದಾರೆ. ಹೂಡಿಕೆದಾರರ ವಿಮಾ ಉದ್ದೇಶ ಸಫಲಗೊಳ್ಳುವಲ್ಲಿ ರಘುಪತಿಗಳ ಪಾತ್ರ ವಿಶೇಷವಾಗಿದೆ, ಅವರ ಪರಿಣತಿಯ ವ್ಯಾಪ್ತಿಯಲ್ಲಿ ಮ್ಯೂಚುವಲ್ ಫಂಡ್ ಸಲಹೆಯೂ ಬರುತ್ತದೆ.
ರಂಗಭೂಮಿ ನಿರ್ದೇಶಕ, ಸಾಹಿತಿ ಮತ್ತು ನಟರಾದ ಸಾತ್ವಿಕ್ ಎನ್ ಎಂ, ನಾಗೇಂದ್ರ ಎನ್ ಎಂ ಅವರಿಂದ ಸ್ಫೂರ್ತಿಯನ್ನು ಪಡೆದು ಹಣಕಾಸಿನ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿದ್ದಾರೆ. ಪ್ರಸ್ತುತ ಅವರು ಒಂದು ಎನ್.ಜಿ.ಓ.ನಲ್ಲಿ ಕೆಲಸ ಮಾಡುತ್ತಿದ್ದು, ಮಕ್ಕಳ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ, ಉಪೇಕ್ಷಿತ ಸಮುದಾಯಗಳಿಗಾಗಿ ಇರುವ ಗ್ರಂಥಾಲಯಗಳನ್ನು ನಿರ್ವಹಿಸುತ್ತಿದ್ದಾರೆ. ಆತ್ಮೀಯದಲ್ಲಿ ಇವರು ಚೀಫ್ ಆಫ್ ಆಪರೇಷನ್ಸ್ ಹೊಣೆಯನ್ನು ಹೊತ್ತು, ವ್ಯವಹಾರ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ನೆಟ್ವರ್ಕಿಂಗ್-ನ್ನು ನಿರ್ವಹಿಸುತ್ತಾರೆ. ಅವರು AMFI ಯ ಹೂಡಿಕೆ ಸಲಹೆಗಾರರಾಗಿದ್ದು, ರಂಗಭೂಮಿ ಮತ್ತು ಹಣಕಾಸು ಎರಡೂ ಕ್ಷೇತ್ರಗಳಲ್ಲಿನ ತಮ್ಮ ಅನುಭವಗಳನ್ನು ಸೇರಿ ಬೆಳೆಸುತ್ತಾ, ಶೈಕ್ಷಣಿಕ ಸಂಸ್ಥೆಗಳು ಮತ್ತು ಕಾರ್ಪೊರೇಟುಗಳಿಗಾಗಿ ಹಣಕಾಸು ಸಾಕ್ಷರತೆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಕಾಳಜಿ ವಹಿಸುವ ಮತ್ತು ತಲುಪಿಸುವ ತಂಡ.
ಶಿಲ್ಪಾ ಕ್ರಿಯಾಶೀಲರು, ಕ್ಲೈಂಟ್ ಆಪರೇಷನ್ ಮತ್ತು ಮ್ಯಾನೇಜ್ಮೆಂಟ್-ನಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಆರಂಭದಿಂದ ಕೊನೆಯವರೆಗಿನ ಹೂಡಿಕೆದಾರರ ಪಯಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ, ಅತ್ಯುನ್ನತ ಮಟ್ಟದ ತೃಪ್ತಿ ಮತ್ತು ಕಾರ್ಯಾಚರಣೆಯ ಉತ್ಕೃಷ್ಟತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಅವರು ನಮ್ಮ ಸಂಸ್ಥೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಕಾರ್ಯಾಚರಣೆಗಳನ್ನು ಸುಗಮಗೊಳಿಸುವಲ್ಲಿ ಮತ್ತು ಅಸಾಧಾರಣ ಫಲಿತಾಂಶಗಳಿಗೆ ಕಾರಣವಾಗುವ ಪರಿಣಾಮಕಾರಿ ಗ್ರಾಹಕ ಸೇವೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಶಿಲ್ಪಾ ಅವರು ಪ್ರಮಾಣೀಕೃತ ಮ್ಯೂಚುವಲ್ ಫಂಡ್ ವಿತರಕರಾಗಿದ್ದಾರೆ ಮತ್ತು ಉತ್ಕೃಷ್ಟತೆಗಾಗಿ ಅವರ ಉತ್ಕಟೇಚ್ಛೆಯಿಂದಾಗಿ ಗ್ರಾಹಕರಿಗೆ ಅವರ ಹೂಡಿಕೆ ಪಯಣದ ಪ್ರತಿಯೊಂದು ಹಂತದಲ್ಲಿಯೂ ಅತ್ಯುತ್ತಮ ಸೇವೆ ಮತ್ತು ಬೆಂಬಲ ಸಿಗುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಬಿಡುವಿನ ಸಮಯದಲ್ಲಿ ಅವರು ಮಂಡಲ ಕಲಾಕೃತಿಗಳನ್ನು ರಚಿಸುತ್ತಾರೆ ಮತ್ತು ಕಥಕ್ ನೃತ್ಯವನ್ನು ಕಲಿಯುತ್ತಿದ್ದಾರೆ.
ಹಣಕಾಸು ನಿರ್ವಹಣೆಯಲ್ಲಿ ಬಲವಾದ ಬುನಾದಿಯನ್ನು ಹೊಂದಿರುವ ಪವನ್ ಜೋಯಿಸ್ ಅವರು ನಾಗೇಂದ್ರ ಎನ್ ಎಂ ಅವರ ಅಡಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ವಾಣಿಜ್ಯ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು, ಎಎಮ್ಎಫ್ಐ ಪ್ರಮಾಣಿತ ಮ್ಯೂಚುವಲ್ ಫಂಡ್ ವಿತರಕರಾಗಿದ್ದಾರೆ. ಪವನ್ ಅವರಿಗೆ ಅಕೌಂಟೆನ್ಸಿ ಮತ್ತು ಮ್ಯೂಚುವಲ್ ಫಂಡ್ಸ್ ಕ್ಷೇತ್ರದಲ್ಲಿ 6 ವರ್ಷದ ಅನುಭವವಿದೆ. ಹೂಡಿಕೆಯ ಅವಕಾಶಗಳನ್ನು ವಿಶ್ಲೇಷಿಸುವುದು ಮತ್ತು ನಿಖರವಾದ ಹಣಕಾಸು ದಾಖಲೆಗಳನ್ನು ನಿರ್ವಹಿಸುವುದು ಅವರ ಪರಿಣತಿಯಾಗಿದೆ. ಅವರ ವಿಶ್ಲೇಷಣಾತ್ಮಕ ಕೌಶಲಗಳು, ವಿವಿರಗಳ ಕುರಿತು ಅವರ ಸೂಕ್ಷಗ್ರಾಹಿತನದಿಂದಾಗಿ ಗ್ರಾಹಕರು ಪ್ರಜ್ಞಾಪೂರ್ವಕ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ಮತ್ತು ಹಣಕಾಸು ನಿಖರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿವೆ. ತಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿ ಉತ್ಕೃಷ್ಟತೆ ಮತ್ತು ಸೂಕ್ಷ್ಮವಿವರಗಳಿಗೆ ಬದ್ಧತೆ ಇವು ಪವನ್ಅವರ ವೈಶಿಷ್ಟ್ಯ.
ಸುಧೀಂದ್ರ ಎಲ್ ಜಿ ಯವರು, ನಾಗೇಂದ್ರ ಎನ್ ಎಂ ಅವರ ನೇತೃತ್ವದಲ್ಲಿ, ಅಕೌಂಟಿಂಗ್ ಮತ್ತು ಹಣಕಾಸು ನಿರ್ವಹಣೆಯ ಕ್ಷೇತ್ರದಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರುವ ಸೀನಿಯರ್ ಅಕೌಂಟೆಂಟ್. ಬೃಹತ್ ಪ್ರಮಾಣದ ಹಣಕಾಸು ದತ್ತಾಂಶಗಳನ್ನು ನಿರ್ವಹಿಸುವುದರಲ್ಲಿ, ನಿಖರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮತ್ತು ಭಾವಿ ಪರಿಣಾಮದ ಹಣಕಾಸು ಒಳನೋಟಗಳನ್ನು ನೀಡುವುದರಲ್ಲಿ ಪರಿಣತರಾಗಿದ್ದಾರೆ. ಅಕೌಂಟಿಂಗ್ ಸಾಪ್ಟ್ವೇರ್ ಮತ್ತು ರೆಗ್ಯುಲೇಟರಿ ಕಾಂಪ್ಲಯನ್ಸ್ ಸ್ಟ್ಯಾಂಡರ್ಡ್ಸ್-ನಲ್ಲಿ ಅವರಿಗಿರುವ ವ್ಯಾಪಕವಾದ ಜ್ಞಾನದಿಂದಾಗಿ ಅವರು ಸಂಸ್ಥೆಗೆ ಮೌಲಿಕ ಆಸ್ತಿಯಾಗಿದ್ದಾರೆ. ಜೂನಿಯರ್ ಅಕೌಂಟೆಂಟರಿಗೆ ಮಾರ್ಗದರ್ಶನ ಮತ್ತು ಮುಂದಾಳತ್ವವನ್ನು ಒದಗಿಸುವ ಸಾಮರ್ಥ್ಯದಲ್ಲಿ ಮತ್ತು ಪರಸ್ಪರ ಸಹಕಾರಿ ಮತ್ತು ಪರಿಣಾಮಕಾರಿ ಕೆಲಸದ ಪರಿಸರವನ್ನು ಪೋಷಿಸುವುದರಲ್ಲಿ ಅವರು ಹೆಸರು ಗಳಿಸಿದ್ದಾರೆ. ಹಣಕಾಸು ಆರೋಗ್ಯ ಮತ್ತು ಸಂಸ್ಥೆಯ ಯಶಸ್ಸನ್ನು ಸುನಿಶ್ಚಿತಪಡಿಸಿಕೊಳ್ಳುತ್ತಾ ತಮ್ಮ ಕೆಲಸಗಳ ಎಲ್ಲಾ ಅಂಶಗಳಲ್ಲಿ ಉತ್ಕೃಷ್ಟತೆಯನ್ನು ಒದಗಿಸುವುದರಲ್ಲಿ ಅವರು ಬದ್ಧರಾಗಿದ್ದಾರೆ.
ಅತ್ಯಂತ ನಿಪುಣ ಹಿರಿಯ ಅಕೌಂಟೆಂಟ್ ಆಗಿರುವ ಕಾರ್ತಿಕ್ ಇವರು ಸಂಸ್ಥೆಯ ಹಣಕಾಸು ಕಾರ್ಯಾಚರಣೆಗಳ ಮೇಲುಸ್ತುವಾರಿಯನ್ನು ನೋಡುವುದರಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಇವರು ಆತ್ಮೀಯದಲ್ಲಿ ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಣಕಾಸು ನಿರ್ವಹಣೆ ಮತ್ತು ನಿಯಂತ್ರಕ ಅನುಪಾಲನೆಯಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ತೆರಿಗೆ ಯೋಜನೆ ಮತ್ತು ಆಡಿಟ್ ನಿರ್ವಹಣೆಯಲ್ಲಿನ ಅವರ ಪರಿಣತಿಯು ನಿರಂತರವಾಗಿ ಸಂಸ್ಥೆಯ ಹಣಕಾಸು ಸ್ಥಿರತೆ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿವೆ. ಉತ್ತಮ ನಾಯಕತ್ವ ಕೌಶಲಗಳು, ವಿವರಗಳಿಗೆ ಗಮನ ಮತ್ತು ಹಣಕಾಸು ಸಮಗ್ರತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡುವುದರಲ್ಲಿ ಅಚಲವಾದ ಬದ್ಧತೆ ಕಾರ್ತಿಕ್ ಅವರ ವೈಶಿಷ್ಟ್ಯ.
ಕೃಷ್ಣಮೂರ್ತಿಯವರು ಉತ್ಸಾಹಿ ಮತ್ತು ವಿಶ್ವಾಸಿ ಕಛೇರಿ ಸಹಾಯಕರು. ಅವರು ದೈನಂದಿನ ಚಟುವಟಿಗಳು ಸುಗಮವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಅವರು ಹಲವು ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಾರೆ; ಹೂಡಿಕೆದಾರರಿಗೆ ದಾಖಲೆಗಳನ್ನು ತಲುಪಿಸುವುದು, ಬ್ಯಾಂಕ್ ವ್ಯವಹಾರಗಳನ್ನು ನೋಡಿಕೊಳ್ಳುವುದು, ವಿವಿಧ ಕೆಲಸಗಳಲ್ಲಿ ಸಿಬ್ಬಂದಿಯವರಿಗೆ ಸಹಾಯ ನೀಡುವುದು ಇತ್ಯಾದಿ. ಸಮಯನಿಷ್ಠೆ, ಬಲವಾದ ಕಾರ್ಯನೈತಿಕತೆ ಮತ್ತು ಅಗತ್ಯ ಏನೇ ಇರಲಿ ತಕ್ಷಣ ನೆರವಿಗೆ ಸಿದ್ಧವಾಗುವುದು ಅವರ ವೈಶಿಷ್ಟ್ಯ.
ದೀಪಿಕಾ ಜಿ ಇವರು ಕುಶಲ ಮತ್ತು ಕರ್ತವ್ಯನಿಷ್ಠ ಕಛೇರಿ ಸಹಾಯಕರು. ಕಛೇರಿಯ ವ್ಯವಸ್ಥೆ ಮತ್ತು ಸಮರ್ಥತೆಯನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಬಹಳ ಮುಖ್ಯವಾದ ಪಾತ್ರ ಇವರದು. ದೈನಂದಿನ ಆಡಳಿತ ಕಾರ್ಯಗಳು, ಕಛೇರಿಗೆ ಅಗತ್ಯವಾದ ಸಾಮಗ್ರಿಗಳ ಸಂಘಟನೆ, ಪತ್ರವ್ಯವಹಾರದ ನಿರ್ವಹಣೆ ಮತ್ತು ಅಗತ್ಯತೆಯನ್ನು ಅನುಸರಿಸಿ ವಿವಿಧ ವಿಭಾಗಗಳಿಗೆ ಬೆಂಬಲ ನೀಡುವುದರಲ್ಲಿ ಅವರು ಉತ್ಕೃಷ್ಟತೆಯನ್ನು ಮೆರೆಯುತ್ತಾರೆ. ಪ್ರಕ್ರಿಯೆಗಳ ಸುಧಾರಣೆಗಾಗಿ ಸದಾ ಪರಿಶ್ರಮಿಸಿತ್ತಾರೆ ಮತ್ತು ಕಂಪನಿ ಬೆಳೆಯುವುದಕ್ಕೆ ಅಗತ್ಯವಾದ ಹೊಸ ಸವಾಲುಗಳನ್ನು ಎದುರಿಸುವುದರಲ್ಲಿ ಅವರದು ಎತ್ತಿದ ಕೈ. ಕೆಲಸದಿಂದ ಬಿಡುವು ಸಿಕ್ಕಾಗ ಅವರು ಚಿತ್ರಕಲೆಯನ್ನು ಬಿಡಿಸುವಲ್ಲಿ ಆನಂದಿಸುತ್ತಾರೆ. ಇದು ಅವರ ವೈಯಕ್ತಿಕ ಬಗೆಯ ಬೆಳವಣಿಗೆಗೆ ಸಹಾಯಕವಾಗಿದೆ.
ಪವನ್ ಒಬ್ಬ ಕರ್ತವ್ಯನಿಷ್ಠ ಅಕೌಂಟೆಂಟ್ ಆಗಿದ್ದಾರೆ, ಹಣಕಾಸು ದಾಖಲೆಗಳ ನಿರ್ವಹಣೆಯಲ್ಲಿ ಮತ್ತು ಅಕೌಂಟಿಂಗ್ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರ ಕಾರ್ಯ ಅನನ್ಯ. ಅಕೌಂಟಿಂಗ್ ಕ್ಷೇತ್ರದಲ್ಲಿ 9 ವರ್ಷ ಅನುಭವವಿರುವ ಪವನ್ ಅವರ ವೈಶಿಷ್ಟ್ಯವೆಂದರೆ, ತಮ್ಮ ಕಾರ್ಯದಲ್ಲಿ ಚಿಕ್ಕಚಿಕ್ಕ ವಿವರಗಳಿಗೂ ಗಮನ, ಬಲವಾದ ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ನಿಖರವಾದ ಮತ್ತು ಆಯಾ ದಿನಕ್ಕೆ ಸಂಗತವಾದ ಹಣಕಾಸು ಮಾಹಿತಿಯನ್ನು ನಿರ್ವಹಿಸುವುದು.
ದಿವ್ಯಾ ಕಾರ್ತಿಕ್ ಅವರು ಸಮರ್ಪಿತ ಮತ್ತು ಫಲಿತಾಂಶ-ಚಾಲಿತ ಮಾರ್ಕೆಟಿಂಗ್ ಅಸೋಸಿಯೇಟ್ ಆಗಿದ್ದು, ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು ಮತ್ತು ಪ್ರಚಾರಗಳನ್ನು ರಚಿಸುವ ಉತ್ಸಾಹದ ಗುಣದವರು. ಅವರು ಸೃಜನಶೀಲತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಸಂಯೋಜನೆಯ ಕೆಲಸ ಮಾಡುತ್ತಾರೆ. ಆತ್ಮೀಯದಲ್ಲಿನ ಅವರ ಪ್ರಸ್ತುತ, ದಿವ್ಯಾ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳು ಮತ್ತು ಪ್ರಚಾರದ ಕಾರ್ಯಕ್ಷಮತೆಯ ವಿಶ್ಲೇಷಣೆಯ ಮೇಲೆ ಕೇಂದ್ರೀಕರಿಸುತ್ತಾರೆ. ಬ್ರ್ಯಾಂಡ್ ಜಾಗೃತಿ. ವಿವರಗಳಿಗಾಗಿ ತೀಕ್ಷ್ಣವಾದ ಕಣ್ಣು ಮತ್ತು ಹೂಡಿಕೆದಾರರ ನಡವಳಿಕೆಯ ಆಳವಾದ ತಿಳುವಳಿಕೆಯೊಂದಿಗೆ. ಕ್ಲೈಂಟ್ ನಿರೀಕ್ಷೆಗಳನ್ನು ಮೀರಿದ ನವೀನ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡಲು ದಿವ್ಯಾ ಕ್ರಾಸ್-ಫಂಕ್ಷನಲ್ ತಂಡಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಾರೆ.
ಭೂಮಿಕಾ ಅವರು ಆತ್ಮೀಯದಲ್ಲಿ ವಿವರ-ಆಧಾರಿತ ಕಛೇರಿ ಅಸೋಸಿಯೇಟ್ ಆಗಿದ್ದು, ದೈನಂದಿನ ಕಚೇರಿ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮತ್ತು ವಿವಿಧ ವಿಭಾಗಗಳಾದ್ಯಂತ ಸುಗಮ ಕೆಲಸದ ಜವಾಬ್ದಾರಿಯನ್ನು ಹೊಂದಿದ್ದಾರೆ. ಸರಿಯಾದ ಕೆಲಸ, ಪತ್ರವ್ಯವಹಾರವನ್ನು ನಿರ್ವಹಿಸುವುದು ಮತ್ತು ಕಛೇರಿ ನಿರ್ವಹಣೆ ಕಾರ್ಯಗಳಲ್ಲಿ ಸಹಾಯ ಮಾಡುವುದು. ಅವರು ಸಾಂಸ್ಥಿಕ ಕೌಶಲ್ಯಗಳು ಮತ್ತು ಕಾರ್ಯಗಳಿಗೆ ಆದ್ಯತೆ ನೀಡುವ ಸಾಮರ್ಥ್ಯವು ತಂಡದ ಅಮೂಲ್ಯ ಸದಸ್ಯರನ್ನಾಗಿ ಮಾಡುತ್ತದೆ. ತನ್ನ ಪಾತ್ರದಲ್ಲಿ, ಭೂಮಿಕಾ ಅವರು ಕಾರ್ಯವಿಧಾನಗಳನ್ನು ನಿರ್ವಹಿಸಲು ಇತರ ತಂಡದ ಸದಸ್ಯರೊಂದಿಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ, ಯೋಜನಾ ನಿರ್ವಹಣೆಗೆ ಕೊಡುಗೆ ನೀಡುತ್ತಾರೆ ಮತ್ತು ಅಗತ್ಯವಿರುವಂತೆ ಆಡಳಿತಾತ್ಮಕ ಬೆಂಬಲವನ್ನು ಒದಗಿಸುತ್ತಾರೆ. ಸಮಸ್ಯೆ-ಪರಿಹರಿಸುವ ಸಾಮರ್ಥ್ಯ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಅವರು ಕಚೇರಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸಹಯೋಗದ ಕೆಲಸದ ವಾತಾವರಣವನ್ನು ಬೆಳೆಸಲು ಬದ್ಧರಾಗಿದ್ದಾರೆ.
ಹೂಡಿಕೆದಾರರ ಕನಸನ್ನು ನನಸಾಗಿಸಲು ಪ್ರಯತ್ನಿಸುವ ಆತ್ಮೀಯ ತಂಡ